ಪ್ರತಿಯೊಬ್ಬರ ಜೀವನ ಸೂಪರ್ ಆಗಿರಬೇಕು ಎಂಬುದು ಆಶಯ. ಈ ಕನ್ನಡ ಚಿತ್ರದಲ್ಲಿ ಅದು ಹ್ಯಾಗೆ ಎಂಬುದನ್ನು ನೀವು ನಾಳೆಯಿಂದ ಬಿಡುಗಡೆ ಆಗುತ್ತಾ ಇರುವ ‘ಲೈಫು ಸೂಪರ್’ ಸಿನಿಮಾ ನೋಡಿ ತಿಳಿಯಬೇಕು.
ನಿರ್ಮಾಪಕ ವಿ ಸಿ ತಿಮ್ಮ ರೆಡ್ಡಿ ಪ್ರತಿಭನ್ವೇಷಣೆ ನಂತರ ಈ ಚಿತ್ರಕ್ಕೆ ತಾರಾಗಣ ಆಯ್ಕೆ ಮಾಡಿದ್ದಾರೆ. ಚೊಚ್ಚಲ ನಿರ್ದೇಶಕ ವಿನೋದ್ ಕುಮಾರ್ ಆರ್ ಅವರ ಒಂದು ಟ್ರೈಲರ್ ನೋಡಿ ನಿರ್ಮಾಪಕರು ಸಿನಿಮಾ ಮಾಡುವುದಕ್ಕೆ ಅನುಮತಿ ನೀಡಿದವರು.
ಈ ಚಿತ್ರದ ಕಥಾ ವಸ್ತು ಸಹ ಕುತೂಹಲ ಉಂಟು ಮಾಡುವುದಿದೆ. ೫ಂ ಕೋಟಿ ಕಪ್ಪು ಹಣವನ್ನು ಬಳ್ಳಾರಿ ಇಂದ ಬೆಂಗಳೂರಿಗೆ ಸರಬರಾಜು ಮಾಡುವ ಸಮಯದಲ್ಲಿ ಘಟಿಸುವ ಸನ್ನಿವೇಶಗಳು ಪ್ರಮುಖ.
ಲಿಕಿತ್ ಸೂರ್ಯ, ಮೇಘನ ಅಪ್ಪಯ್ಯ, ನಿರಂತ್, ಅನು ಪೂವಯ್ಯ ಜೊತೆಗೆ ಪೋಷಕ ಕಲಾವಿದರಾಗಿ ರಂಗಾಯಣ ರಘು, ಅಚ್ಯುತ್ ಕುಮಾರ್, ಸುಧಾಕರ್ ಹಾಗೂ ಇತರರು ಇದ್ದಾರೆ. ಜೂಡೋ ಸ್ಯಾಂಡಿ ಸಂಗೀತ, ಸೂರ್ಯಾಕುಮಾರ್ ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಒದಗಿಸಿದ್ದಾರೆ.